Sunday, December 16, 2012

"ಥಟ್ ಅಂಥ ಹೇಳಿ "








ಚಂದನ ವಾಹಿನಿಯಲ್ಲಿ ನಮ್ಮ
 ಮಕ್ಕಳು ಪ್ರೌಢಶಾಲೆ ಗಳಿಗಾಗಿ 
ನಡೆದ "ಥಟ್ ಅಂಥ ಹೇಳಿ "
 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Sunday, September 2, 2012

Saturday, July 7, 2012

ಚಂದ ಪದ್ಯ



ಮಕ್ಕಳ ರೈಲು ಬಂತು
ಚುಕ್ಕು ಚುಕ್ಕು ಚುಕ್ಕೂ
ಮರದಲ್ಲಿ ಹಕ್ಕಿಯೊಂದು
ಕುಕ್ಕು ಕುಕ್ಕು ಕುಕ್ಕೂ

ಕುರುಕು ತಿಂಡಿಯನ್ನು
ಮುಕ್ಕು ಮುಕ್ಕು ಮುಕ್ಕೂ
ಪರೀಕ್ಷೆಯಲ್ಲಿ ಉತ್ತರವ
ಕಕ್ಕು ಕಕ್ಕು ಕಕ್ಕೂ

ಜಾಡಿಯ ಉಪ್ಪಿನಕಾಯಿ
ನೆಕ್ಕು ನೆಕ್ಕು ನೆಕ್ಕೂ
ಬಾಯಿ ಖಾರವಾದರೆ
ಹುಕ್ಕು ಹುಕ್ಕು ಹುಕ್ಕೂ

ರಜೆಯಲ್ಲಿ ಪಠ್ಯಕ್ಕೆ
ತುಕ್ಕು ತುಕ್ಕು ತುಕ್ಕೂ
ಶಾಲೆ ಶುರುವಾದಾಗ
ಬಿಕ್ಕು ಬಿಕ್ಕು ಬಿಕ್ಕೂ

ದುಷ್ಟನಾ ಮೈತುಂಬಾ
ಸೊಕ್ಕು ಸೊಕ್ಕು ಸೊಕ್ಕೂ
ಆಳಿಗೊಂದು ಗುದ್ದನ್ನು
ಹಾಕು ಹಾಕು ಹಾಕೂ

ಅಜ್ಜಿಯ ಚರ್ಮವೆಲ್ಲಾ
ಸುಕ್ಕು ಸುಕ್ಕು ಸುಕ್ಕೂ
ಅಜ್ಜಿ ಕತೆ ಕೇಳಿ ಎಲ್ಲಾ
ನಕ್ಕು ನಕ್ಕು ನಕ್ಕೂ

ನಾಯಿಯು ಬೊಗಳುವುದು
ಬ್ಯಕ್ಕು ಬ್ಯಕ್ಕು ಬ್ಯಕ್ಕೂ
ಕುದುರೆಯು ಓಡುವುದು
ಟೊಕ್ಕು ಟೊಕ್ಕು ಟೊಕ್ಕೂ
ಮನೆಯಲ್ಲಿರಲಿ ನಾಯಿ ಜೊತೆ
ಬೆಕ್ಕು ಬೆಕ್ಕು ಬೆಕ್ಕೂ
ಜೊತೆಗಿಷ್ಟು ಹಕ್ಕಿಗಳು
ಬೇಕು ಬೇಕು ಬೇಕೂ

ಅಮ್ಮನ ಕೂದಲೆಲ್ಲಾ
ಸಿಕ್ಕು ಸಿಕ್ಕು ಸಿಕ್ಕೂ
ಅಪ್ಪನ ಬೂಟು ದನಿ
ಟಕ್ಕು ಟಕ್ಕು ಟಕ್ಕೂ

ಯಾವಾಗಲೂ ಮಿನುಗಬೇಕು
ಲಕ್ಕು ಲಕ್ಕು ಲಕ್ಕೂ
ಇಲ್ಲವಾದ್ರೆ ಮುಸ್ರೆ ಪಾತ್ರೆ
ತಿಕ್ಕು ತಿಕ್ಕು ತಿಕ್ಕೂ

ಓದಬೇಕು ರಾಶಿ ರಾಶಿ
ಬುಕ್ಕು ಬುಕ್ಕು ಬುಕ್ಕೂ
ಒಳ್ಳೆಯ ವಿಷಯವನ್ನೆ
ಹೆಕ್ಕು ಹೆಕ್ಕು ಹೆಕ್ಕೂ

ಪರೀಕ್ಷೆ ಬಂತಂದ್ರೆ
ಪುಕ್ಕು ಪುಕ್ಕು ಪುಕ್ಕೂ
ಮೇಷ್ಟರು ಕೊಡ್ತಾರೆ
ಕಿಕ್ಕು ಕಿಕ್ಕು ಕಿಕ್ಕೂ

ಮಕ್ಕಳ ಸಂಭ್ರಮದ
ಉಕ್ಕು ಉಕ್ಕು ಉಕ್ಕೂ
ನೋಡಲು ಚಂದ ಅದರ
ಲಕ್ಕು ಲಕ್ಕು ಲಕ್ಕೂ

ತೋರಬೇಕು ಮಕ್ಕಳಿಗೊಳ್ಳೆ
ದಿಕ್ಕು ದಿಕ್ಕು ದಿಕ್ಕೂ
ದಕ್ಕಬೇಕು ಮಕ್ಕಳಿಗವರ
ಹಕ್ಕು ಹಕ್ಕು ಹಕ್ಕು

ಮುದ್ದು ತೀರ್ಥಹಳ್ಳಿ 
( ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ )

Monday, July 2, 2012

ಗೋವಿಂದ ಪೈ ಅವರ ಕವಿತೆ: ನವೋದಯ ಚೌಕಟ್ಟಿನಲ್ಲಿ


ಹೊಸಗನ್ನಡದ ಕಿರಣೋದಯಕ್ಕೆ ತಮ್ಮ ವ್ಯಕ್ತಿತ್ವದ ಪ್ರಭೆಯನ್ನು ಸೇರಿಸಿದ ಹಲವು ಹಿರಿಯ ಸಾಹಿತಿಗಳಲ್ಲಿ ಗೋವಿಂದ ಪೈ ಅವರೂ ಒಬ್ಬರು. ಕನ್ನಡ ಕಾವ್ಯ ಸ್ಥಗಿತಗೊಂಡು  ಆಗಲೇ ಮೂರು ದಶಕಗಳಾಗಿದ್ದ ಅಂದಿನ ಪರಿಸರದಲ್ಲಿ, ಅದಕ್ಕೆ ಹೊಸ ನೀರನ್ನು ನುಗ್ಗಿಸಿ,ಹೊಸ ಕಾಲುವೆಗಳನ್ನು ತೋಡಿ, ಹೊಸ ಹಸಿರನ್ನು ಬೆಳೆಯಲು ಶ್ರಮಿಸಿದವರಲ್ಲಿ ಪೈ ಅವರು ಮುಖ್ಯರಾದವರು. ಅಂದಿನ ಸಾಹಿತ್ಯಕ್ಕೆ ಚಲನಶೀಲತೆಯನ್ನು ತರುವ ಹೊಸರೂಪಗಳ ಹುಡುಕಾಟ ನಡೆದದ್ದು, ಮಂಗಳೂರು, ಮೈಸೂರು ಮತ್ತು ಧಾರವಾಡದ ಪರಿಸರಗಳಲ್ಲಿ.ಮಂಗಳೂರಿನ ಪರಿಸರದಲ್ಲಿ ಇನ್ನೂ ಹಲವರ ಜತೆ, ತಮ್ಮ ಸಂಶೋಧನೆ ಹಾಗೂ ಬರೆಹಗಳ ಮೂಲಕ, ಹೊಸ ರೂಪಗಳನ್ನು ಕನ್ನಡ ಸಾಹಿತ್ಯಕ್ಕೆ ತಂದವರು ಪೈ ಅವರು ಸಾಹಿತ್ಯ ಸಂಶೋಧನೆ ಮತ್ತು ಕಾವ್ಯ ಈ ಎರಡೂ ಅವರು ಕೆಲಸ ಮಾಡಿದ ಪ್ರಮುಖ ಕ್ಷೇತ್ರಗಳು. ಕನ್ನಡ ಸಂಶೋಧನೆಯ ಶಿಲಾತಲದಿಂದ ಅವರು ತೆಗೆದ ಎಷ್ಟೋ ಸಂಗತಿಗಳು, ಮುಂದಿನವರ ಚಿಂತನೆಯ ನೆಲೆಗಟ್ಟುಗಳಾಗಿವೆ.
ಗೋವಿಂದ ಪೈ ಮೊದಲು ತಮ್ಮ ಕವಿತೆಯನ್ನು ಪ್ರಕಟಿಸಿದ್ದು ೧೯೦೦ರಲ್ಲಿ; ಆನಂತರ ಆರು ದಶಕಗಳವರೆಗೆ ಸಾಗಿತು ಅವರ ಸಾಹಿತ್ಯ ನಿರ್ಮಿತಿ. ಪೈ ಅವರು ಸಾಹಿತ್ಯ ನಿರ್ಮಿತಿಗೆ ತೊಡಗಿದ ಕಾಲವನ್ನು ಇಂದು ನಾವು ‘ನವೋದಯ’ ಎಂದು ಗುರುತಿಸುತ್ತೇವೆ, ಮತ್ತು ಕಾವ್ಯದ ಮಟ್ಟಿಗೆ ಅವರನ್ನು ನವೋದಯ ಪರಂಪರೆಗೆ ಸೇರಿದವರು ಎಂದು ಪರಿಗಣಿಸುತ್ತೇವೆ. ಇಂದು ಯಾವುವನ್ನು ‘ನವೋದಯ ಸಾಹಿತ್ಯದ ಲಕ್ಷಣಗಳು’ ಎಂದು ಗುರುತಿಸುತ್ತೇವೆಯೋ, ಅವು ಪೈ ಅವರ ಕಾವ್ಯದಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಲುತ್ತವೆ. ಈ ದೃಷ್ಟಿಯಿಂದ ಪೈ ಅವರ ಕಾವ್ಯ ನವೋದಯದ ಚೌಕಟ್ಟಿನೊಳಗಣದು. ನವೋದಯ ಕಾವ್ಯದ ಈ ಹಾದಿಯಲ್ಲಿ, ಕನ್ನಡ ಕಾವ್ಯ ಪ್ರಕಾರಗಳ ದೃಷ್ಟಿಯಿಂದ ಮತ್ತು ಪ್ರಯೋಗಗಳ ದೃಷ್ಟಿಯಿಂದ ಹಲವು ‘ಮೊದಲು’ಗಳನ್ನು ತೆರೆದವರು ಅವರು


from: kanaja

Monday, February 13, 2012

ಏನೆಂದರು ತುಂಭಾ ಕಷ್ಟದ ವಿಚಾರವೇ
ಬರೆಯುವುದೆಂದರೆ...............