Thursday, March 21, 2019

ಮತದಾನ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ

ಮತದಾನ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ

ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಂದ ಬೀದಿನಾಟಕ ಪ್ರದರ್ಶನಗಳು ಹಲವು ಕಡೆ ನಡೆಸಲಾಯಿತು. ಮಕ್ಕಳು ಬೀದಿನಾಟಕದ ಮೂಲಕ ಮತದಾನ ನಮ್ಮ ಹಕ್ಕು ಮತವನ್ನು ಯೋಚಿಸಿ ಚಲಾಯಿಸಿದರೆ ಉಜ್ವಲ ಭವ್ಯ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಮತದಾನ ನಮ್ಮ ಹಕ್ಕು ದೇಶದ ಮೇಲಿನ ಅಭಿಮಾನದಿಂದ ನಾವು ಓಟನ್ನು ಮಾಡಬೇಕು ಎಂದು ಸ್ಪಷ್ಟವಾಗಿ ಮಕ್ಕಳು ಬೀದಿ ನಾಟಕದ ಮೂಲಕ ಅರ್ಥೈಸಿದರು. ಉತ್ತಮ ರಾಷ್ಟ್ರಕ್ಕಾಗಿ ಮತದಾನ ಮಾಡಬೇಕು ನಮ್ಮ ಮತ ನಮಗೆ ನೀಡಿಕೊಳ್ಳುವ ಬಹುಮಾನ ಎಂದು ತಿಳಿಸುತ್ತಾ "ಮತದಾರ ಪ್ರಭುವೇ ಸುಪ್ರಭಾತವು ನಿನಗೆ ಏಳಯ್ಯ ಬೆಳಗಾಯಿತು." ಎಂದು ಹಾಡುವುದರ ಮೂಲಕ ಮತದಾರನನ್ನು ಎಚ್ಚರಿಸುವ ಕಾರ್ಯವನ್ನು ಮಕ್ಕಳ ಬೀದಿನಾಟಕದ ಮೂಲಕ  ಜಾಗೃತಿ ಮೂಡಿಸುವಲ್ಲಿ ಕೈಗೊಂಡ ಕಾರ್ಯ ಶ್ಲಾಘನೀಯವಾಗಿತ್ತು.











ಬೀದಿನಾಟಕದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು
ತಾಹಶೀಲದಾರರಾದ ಶ್ರೀಮತಿ ನೀಲಪ್ರಭರವರು ಉಪತಹಸೀಲ್ದಾರರು ಮತ್ತು ಸೆಕ್ಟರ್ ಆಫೀಸರ್ ಆದ ಶ್ರೀಯುತ ಹೊನ್ನಪ್ಪರವರು  ಮತದಾನ ಜಾಗೃತಿ ಬೀದಿನಾಟಕದ  ಪ್ರದರ್ಶನವನ್ನು ವೀಕ್ಷಣೆ ಮಾಡಿ ಮಕ್ಕಳ ಪ್ರದರ್ಶನದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮತದಾರರ ಜಾಗೃತಿಯನ್ನು ಬೀದಿನಾಟಕದ ಮೂಲಕ ಪ್ರದರ್ಶನ ನೀಡಿಸಿದ್ದು ಅತ್ಯಂತ ಪರಿಣಾಮಕಾರಿಯಾಗಿತ್ತು. ಜಾಥ ಹಾಗೂ ಬೀದಿನಾಟಕ ಪ್ರದರ್ಶನದಲ್ಲಿ ತಹಸೀಲ್ದಾರವರಾದ ಶ್ರೀಮತಿ ನೀಲಪ್ರಭ,ಉಪತಹಸೀಲ್ದಾರರು ಮತ್ತು ಸೆಕ್ಟರ್ ಆಫೀಸರ್ ಆದ ಶ್ರೀಯುತ ಹೊನ್ನಪ್ಪರವರು ಪೊಲೀಸ್ ಅಧಿಕಾರಿ ಕಾಶಾಪ್ಪ ಜಗ್ಗಲ್, ಮುಖ್ಯೋಪಾಧ್ಯಾಯರಾದ ಮುತ್ತಣ್ಣ, ಹಿರಿಯ ಶಿಕ್ಷಕರಾದ ನಿಂಗಪ್ಪ ಚಕ್ರಸಾಲಿ, ಶರಣಪ್ಪ ಪಾಟೀಲ್ , ತೀರ್ಥಯ್ಯ ಮಠದ, ಸಾವಿತ್ರಿ ಅಂದಲಗಿ, ಗಿರಿಜಾದೇವಿ ಪತ್ತಾರ, ಶಿಲ್ಪಬಾಯಿ ಟೊಣಗಟ್ಟಿ ಹಾಗೂ ರಂಗಶಿಕ್ಷಕಿ ಶಾಂತಮಣಿ ಯವರು ಮಕ್ಕಳೊಟ್ಟಿಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು.

No comments:

Post a Comment