Tuesday, April 21, 2015

ಬಿ. ಚಂದ್ರಶೇಖರ, ಬಿ.ಇ.ಒ, ಪಾಂಡವಪುರ

ಬಿ. ಚಂದ್ರಶೇಖರ 
ಬಿ.ಇ.ಒ 
ಪಾಂಡವಪುರ 

ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಛೇರಿ ಹಾಗೂ ಐ.ಎಫ್.ಎ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ, ಮೂಢಲಕೊಪ್ಪಲು ಶಾಲೆಯಲ್ಲಿ ಕಲಿ ಕಲಿಸು ಕಾರ್ಯಕ್ರಮ ಸಂಬಂಧ ನಡೆದ ಎರಡು ದಿನಗಳ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಾಯಿತು. 

ಪ್ರಸಕ್ತ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಕಲೆಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ತರಗತಿ ಪಠ್ಯಕ್ಕೆ ಸಂಬಂಧಿಸಿದ ಕಲಿಕಾಂಶವನ್ನು ನಾಟಕ, ನೃತ್ಯ , ಸಂಗೀತದ ಮೂಲಕ ಹೇಳಿಕೊಡುವ ಕಲ್ಪನೆ ಅರ್ಥ ಪೂರ್ಣವಾದದ್ದು. ಮಗುವಿನ ಮನಸ್ಸನ್ನು ಅರಿತು ಅಭಿನಯದ ಮೂಲಕ ತರಗತಿ ನಿರ್ವಹಣೆ ಮಾಡಿದಾಗ ಕಲಿಕೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. 

ಈ ಹಿನ್ನಲೆಯಲ್ಲಿ ಕಾರ್ಯಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ಅನುಭವಗಳನ್ನು ತಮ್ಮ ತಮ್ಮ ತರಗತಿ ಸನ್ನಿವೇಶದಲ್ಲಿ ಅನುಷ್ಟಾನಗೊಳಿಸುವ ಪ್ರಾಮಾಣಿಕ ಪ್ರಯತ್ನವಾದರೆ ಈ ಕಾರ್ಯಗಾರ ಯಶಸ್ಸನ್ನು ಪಡೆಯುವುದೆಂದು ನಿರೀಕ್ಷಿಸುತ್ತೇನೆ. 

No comments:

Post a Comment