Friday, August 15, 2014

ಆರು ಕೊಂಬಿನ ಆನೆ

    ಬೋದಿಸತ್ವನು  ಒಂದು  ಸಲ ವಾರಾಣಸಿಯ ರಾಜನ ಮಂತ್ರಿಗೆ ಮಗನಾಗಿ ಹುಟ್ಟಿದನು. ಚಿಕ್ಕಂದಿನಿಂದಲೇ ಅವನು ಬುದ್ದಿಶಾಲಿಯಾದ್ದರಿಂದ ಅವನಿಗೆ ಮೇದಾವಿ ಎಂದು ಹೆಸರಿಟ್ಟರು. ತಂದೆ ಕಾಲವಾದ ಮೇಲೆ ತನ್ನ ತಂದೆಯ  ಸ್ಥಾನಕ್ಕೆ ಮೇದಾವಿ ಮಂತ್ರಿಯಾದ.
        ವಾರಾಣಾಸಿಯ ರಾಜನ ಅರಮನೆಯಲ್ಲಿ ಒಂದು ಪಟ್ಟದ ಆನೆ ಇತ್ತು. ಅದಕ್ಕೆ ಪ್ರತಿದಿವಸವು ದೊಡ್ಡ ದೊಡ್ಡ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದರು. ರಾಜನಿಗೆ ತನ್ನ ಪಟ್ಟದ ಆನೆಯನ್ನು ಕಂಡರೆ ತುಂಭಾ ಸಂತೋಷವಾಗುತ್ತಿತ್ತು. ಬಿಡುವಾದಾಗ ದೊರೆ ತಾನೆ ಬಂದು ತನ್ನ ಕೈಯಾರೆ ಆನೆಗೆ ಅನ್ನದ ಮುದ್ದೆಗಳನ್ನು ತಿನ್ನಿಸುತ್ತಿದ್ದ.  ಆನೆ  ನಾಯಿಯನ್ನು ಕರೆದು ಪ್ರೀತಿಯಿಂದ ಒಂದು ಮುದ್ದೆ ಅನ್ನವನ್ನು ಹಾಕಿತು. ನಾಯಿ ತನ್ನ ಜನುಮದಲ್ಲಿ ಎಂದು ಸೊಗಸಾದ ಅನ್ನ ತಿಂದಿರಲ್ಲಿಲ್ಲ ಆನೆಯನ್ನು ಕಂಡು ಅದಕ್ಕೆ ಹೆದರಿಕೆ ಇದ್ದರು,  ಅನ್ನದ ಮೇಲಿನ ಆಸೆಯಿಂದ ಮುಂದೆ ಬಂದು ಇಡಿಯ ಮುದ್ದೆಯಲ್ಲಿ ಒಂದು ಅಗಳು ಬಿಡದೆ ಹಾಗೇ ತಿಂದು ಬಿಟ್ಟಿತು. ನಾಯಿ ಅನ್ನ ತಿನ್ನುವಾಗ ಆನೆ ಪ್ರೀತಿಯಿಂದ ಅದರ ಬೆನ್ನನ್ನು ಸವರುತ್ತಿತ್ತು.                                                                                                                                                                                   

No comments:

Post a Comment